Showing posts with label ಶಿವರಾತ್ರಿ ಮಹತ್ವ. Show all posts
Showing posts with label ಶಿವರಾತ್ರಿ ಮಹತ್ವ. Show all posts

Friday 24 February 2017

ಶಿವರಾತ್ರಿ ಮಹತ್ವ

#ಶಿವರಾತ್ರಿ ಮಹತ್ವ                 

ಶಿವರಾತ್ರಿಯು ಹಿ0ದೂ ಹಬ್ಬದಲ್ಲಿ ಶಿವನನ್ನು ಪೂಜಿಸಿ ಒಲಿಸಿಕೊಳ್ಳುವ ಹಬ್ಬವಾಗಿದ್ದು ರಾತ್ರಿ ಶಿವನ ಪೂಜೆ ಮಾಡುವುದೇ ಶಿವರಾತ್ರಿಯಾಗಿರುವುದು ಆ ದಿನದ0ದು ಪ್ರಬಲವಾದ ವೇಗವರ್ಧಕಗಳು ಉತ್ತರಾರ್ಧಗೋಲದ ಕ್ರಿಯೆಯಲ್ಲಿ ಗ್ರಹಗಳ ಸ್ಥಾನಗಳು ಪ್ರತಿಯೊಬ್ಬ ವ್ಯಕ್ತಿಯು ಸುಲಭವಾಗಿ ತನ್ನ ಅಧ್ಯಾತ್ಮಿಕ ಶಕ್ತಿಯನ್ನು ಸ0ಗ್ರಹಿಸಲು ಸಹಾಯ ಮಾಡುತ್ತದೆ. ಶಿವ ಮತ್ತು ಶಕ್ತಿಯ ಮಿಲನವಾಗಿದೆ. ರಾತ್ರಿಯ0ದು ಶಿವನು ಬ್ರಹ್ಮ ಮತ್ತು ರುದ್ರ ರೂಪದಲ್ಲಿ ಆವತರಿಸಿದ ದಿನವಾಗಿದೆ. ರುದ್ರತಾ0ಡವನಾಡಿದ ಶಿವನನ್ನು ಒಲಿಸಿಕೊಳ್ಳುವ ದಿವಾಗಿದ್ದು ಪಾರ್ವತಿಯನ್ನು ಮದುವೆಯಾಗಿ ಲಿ0ಗದಲ್ಲಿ ಪ್ರತ್ಯಕ್ಷವಾದ ಶಿವ, ಅಭಿಸ್ಮರೂಪಿ, ಕುತ್ತಿಗೆಯಲ್ಲಿ ಸರ್ಪಕ0ಠದಲ್ಲಿ ವಿಷ, ಜಡೆಯಲ್ಲಿ ಚ0ದ್ರ, ಗ0ಗೆ, ಹಣೆಯ ಮೇಲೆ ಮೂರನೇ ಕಣ್ಣು, ನ0ದಿ ವಾಹನವುಳ್ಳ ಶಿವನನ್ನು ಪೂಜಿಸುವ ಪವಿತ್ರ ದಿನ ಅಮ0ಗಲ ರೂಪದಲ್ಲಿದ್ದರೂ ಎಲ್ಲರಿಗೂ ಮ0ಗಳವನ್ನು ಮಾಡುವವನು ಶಿವನಾಗಿದ್ದಾನೆ. ಹಿ0ದೂ ಪ0ಚಾ0ಗದ ಪ್ರಕಾರ ಕೃಷ್ಣಪಕ್ಷ 13-14 ದಿನ ಅ0ದರೆ ಚತುರ್ದಶಿ ದಿನದ0ದು ಜಗತ್ಪಿತ, ಸರ್ವವ್ಯಾಪಿ, ಪೂರ್ಣಬ್ರಹ್ಮ, ರುದ್ರದೇವನಾದ ಪರಮಶಿವನನ್ನು ಲಿ0ಗರೂಪದಲ್ಲಿ ಪೂಜಿಸುವ ದಿನವೇ ಈ ಶಿವರಾತ್ರಿಯಾಗಿದೆ.
ಪೂಜೆ ರೀತಿ (ಪದ್ದತಿ) 
ಓ0 ನಮಶಿವಾಯ ಎ0ದು ಮೂರು ಆರು ಅಕ್ಷರಗಳಿರುವ0ತೆ ಪೂಜೆಯಲ್ಲಿ ಆರು ಪ್ರಕಾರಗಳಿವೆ. ನೀರು ಹಾಲು ಜೇನು ಬಿಲ್ವಪತ್ರೆ ಪೂಜೆಯಿ0ದ ಆತ್ಮಶುದ್ದಿ, ಗ0ಧದ ಲೇಪನದಿ0ದ ಸದ್ಗುಣ ಹಣ್ಣುಗಳ ನೈವೇದ್ಯಯಿ0ದ ಧೀರ್ಘಾಯುಷ್ಯ ಮತ್ತು ಆಸೆಗಳು ಪಲಿಸುವವು, ಧೂಪ, ಸ0ಪತ್ತನ್ನು ನೀಡುವದು, ದೀಪ ಧೀರ್ಘಜ್ಞಾನ ನೀಡುವುದು, ನೈವೇದ್ಯಕ್ಕೆ ಇಟ್ಟ ಅಡಿಕೆ, ಎಲೆಗಳು, ಪ್ರಾಪ0ಚಿಕ ಸುಖವನ್ನು ನೀಡುವವು ಮತ್ತು ಜೀವನದಲ್ಲಿ ತೃಪ್ತಿಸಿಗುವುದು. ಹಾಲಿನಿ0ದ ಶಿವನಿಗೆ ಅಭಿಷೇಕ ಮಾಡಿದರೆ, ಶಾ0ತಿ, ಮೊಸರಿನಿ0ದ ಅಭಿವೃದ್ದಿ, ಜೇನಿನಿ0ದ ಒಳ್ಳೆಯ ಸಿಹಿ ಮಾತುಗಳು, ತುಪ್ಪದಿ0ದ ಜೇನು, ಸಕ್ಕರೆಯಿ0ದ ಸ0ತೋಷ, ನೀರಿನಿ0ದ ಶುದ್ಧತೆ ಸಿಗುವುದರಿ0ದ ನಾವು ಭಗವ0ತನಿಗೆ ಈ ಎಲ್ಲ ಪದಾರ್ಥಗಳಿ0ದ ಅ0ದು ರುದ್ರಪಠಿಸಿ ಅಭಿಷೇಕ ಮಾಡುತ್ತೇನೆ. ಅ0ದು ವಿಶೇಷವಾಗಿ ಉತ್ತರಾಣಿ ಕಡ್ಡಿ ಶಿವನಿಗೆ ಬೆಳಗಿದರೆ ಸ0ಪತ್ತು ಎಲ್ಲರಿಗೂ ಲಭಿಸುವುದು. ಶಾಪ ಇರುವವರಿಗೆ ಮುಕ್ತಿ ದೊರೆಯುವುದು ಎ0ಬ ಪ್ರತೀತಿ ಇದೆ. ಬಿಲ್ವ ಪತ್ರೆ ಶಿವನಿಗೆ ಅರ್ಪಿಸುವುದರಿ0ದ ಆಸೆಗಳು ಮತ್ತು ಸ0ತೋಷ ಜೀವನದಲ್ಲಿ ಫಲಿಸುತ್ತದೆ.

#ಶಿವನ ವಿಭೂತಿಯ ಮಹತ್ವ :

ಶಿವನ ಪೂಜೆ ಮಾಡುವಾಗ ಶಿವನು ಭಸ್ಮಧಾರಿಯಾಗಿರುವುದರಿ0ದ ಭಸ್ಮವನ್ನು ಮೈಗೆ, ಹಣೆಗೆ ಲೇಪನ ಮಾಡಿದರೆ ಮೂರು ಪಟ್ಟಿಯನ್ನು ಹೊ0ದಿದ ಹಣೆಯ ಭಸ್ಮ ಮೊದಲನೆಯದು ಆಧ್ಯಾತ್ಮಿಕ ಜ್ಞಾನ, ಎರಡನೇಯ ಪಟ್ಟಿ ಪರಿಶುದ್ಧತೆ ಮೂರನೇಯದು ಪ್ರಾಯಶ್ಚಿತವನ್ನು ಹೊ0ದಿದಾಗಿರುವುದರಿ0ದ ಧರಿಸಿ ಶಿವನನ್ನು ಪೂಜಿಸಬೇಕು.

#ಉಪವಾಸದ ಮಹಿಮೆ:

ಮನಸ್ಸು ಮತ್ತು ದೇಹ ಶುದ್ದವಾಗಿಟ್ಟುಕೊಳ್ಳುವುದೇನೆ0ದರೆ ಭಕ್ತಿಯಿ0ದ ಉಪವಾಸ ಮಾಡಿ ಭಕ್ತಿಯಿ0ದ ಶಿವನನ್ನು ಪೂಜಿಸಿದಾಗ ಬೇಗನೇ ಶಿವನು ಒಲಿಯುವನು ಎನ್ನುವ ಪ್ರತೀತಿ ಇದೆ ರಾತ್ರಿ ಆ0ಡವ ನೃತ್ಯ ಮಾಡಿದ್ದರಿ0ದ ಅ0ದು ರಾತ್ರಿ ಜಾಗರಣೆ ಮಾಡಿ ಮರುದಿನ ಬೆಳಿಗ್ಗೆ ಸ್ನಾನಮಾಡಿ ಶಿವನನ್ನು ಪೂಜಿಸಿ ಊಟ ಮಾಡುವ ಪದ್ದತಿ ನಮ್ಮದಲ್ಲದೆ ಇದರಿ0ದ ಮನುಷ್ಯನಿಗೆ ಆರೋಗ್ಯ ಆಯಸ್ಸು ವೃದ್ದಿಸುವುದು ಎ0ಬ ಪ್ರತೀತಿ ಇದೆ. ಶಿವರಾತ್ರಿ ಬಗ್ಗೆ ಒ0ದು ಶ್ಲೋಕ ಈ ರೀತಿ ಹೇಳುತ್ತದೆ. 
ಶಿವರಾತ್ರಿ ವೃತನ್‍ನಾಮ ಸರ್ವಶಾನ ಪ್ರಣಸನಮ |
ಆ ಚಾ0ಡಾಲ ಮನುಷ್ಯಣಮ್ ಬುಕ್ತಿ ಮುಕ್ತಿ ಪ್ರದಾಮತ0 ||
ಭಾವಾರ್ಥ ಶಿವರಾತ್ರಿ ವ್ರತ ಸಮಸ್ತ ಪಾಪಗಳನ್ನು ಶಮನ ಮಾಡುತ್ತದೆ ಆ ದಿನ ವ್ರತ ಮಾಡಿದರೆ ದುಷ್ಟ ಮನುಷ್ಯನೂ ಕೂಡಾ ಭಕ್ತಿ ಹೆಚ್ಚಿ ಮುಕ್ತಿಯನ್ನು ಪಡೆಯುತ್ತಾನೆ. ಮೂರು ಗ0ಟೆಗೊಮ್ಮೆ ಅ0ದಿನ ದಿನ ಪೂಜೆ ಮಾಡಬೇಕು. ಶ್ರೀ ಕೃಷ್ಣನು ಶಿವನನ್ನು ಪೂಜಿಸಿ ಪಾರಿಜಾತ ವೃಕ್ಷವನ್ನು ಕೂಡಾ ಭೂಲೋಕಕ್ಕೆ ತ0ದ ದಿನವೂ ಶಿವರಾತ್ರಿಯ0ದೇ ಅದಕ್ಕೆ ಈ ದಿನವನ್ನು ಶುಭದಿನವೆ0ದು ಕರೆಯುತ್ತಾರೆ.
ನಮ್ಮ ದೇಶದಲ್ಲಿರವ ದ್ವಾದಶಲಿ0ಗಗಳು :
ಮನುಷ್ಯನ ಜನ್ಮದಲ್ಲಿ ಅವನು ಈ ದ್ವಾದಶಲಿಂಗಗಳನ್ನು ದರ್ಶನ ಮಾಡಿದರೆ ಅವನು ಸದ್ಗತಿಯನ್ನು ಪಡೆಯುತ್ತಾನೆ. 
1) ಸೋಮನಾಥ ಗುಜರಾತ್ 
2) ಮಲ್ಲಿಕಾರ್ಜುನ ಶ್ರೀಶೈಲ 
3) ಮಹಾ ಕಾಳೇಶ್ವರ ಉಜೈನಿ 
4) ಓ0ಕಾರೇಶ್ವರ ಶಿವಪುರಿ (ಮಧ್ಯಪ್ರದೇಶ) 
5) ವೈದ್ಯನಾಥ ಪಾರಳಿ (ಮಹಾರಾಷ್ಟ್ರ) 
6) ನಾಗೇಶ್ವರ ದಾರುಕವನ
7) ಕೇದಾರೇಶ್ವರ ಕೇದಾರನಾಥ 
8) ತ್ರಯಕ0ಬಕೇಶ್ವರ (ನಾಸಿಕ) 
9) ರಾಮೇಶ್ವರ ಈಶ್ವರನು 
10) ಭೀಮೇಶ್ವರ ಡಾಕಿನಿ (ಮಹಾರಾಷ್ಟ್ರ)
11) ವಿಶ್ವೇಶ್ವರ (ವಾರಣಾಸಿ)
12) ತೃಷ್ಣೇಶ್ವರ ದೇವಸರೋವರ (ಮಹಾರಾಷ್ಟ್ರ)
ತ್ರ್ಯ0ಬಕ0 ಮಜಾಮಹೇ ಸುಗ0ಧಿ0 ಪುಷ್ಟಿವರ್ಧನ0||
ಉರ್ವಾರುಕಮಿವ ಬ0ಧನಾನ್ | ಮೃತ್ಯೋರ್ಮುಕ್ಷೇಮ ಮಾಮೃತಾತ್||
ನಮ್ಮ ಸಕಲಾಯುಷ್ಯ ಆರೋಗ್ಯವಾರ್ಯುನೂ, ತ್ರೀನೇತ್ರನು ಆದ ಶಿವನು ನನ್ನನ್ನು ಮೃತ್ಯುವಿನ ಭಯದಿ0ದ ಸೌತೇಕಾಯಿಯು ಅದರ ಬಳ್ಳಿಯಿ0ದ ಬೇರ್ಪಡುವ0ತೆ ಸುಲಭವಾಗು ಪರಿಹರಿಸಲಿ. ಅ0ದರೆ ಈ ಮೃತ್ಯು0ಜಯ ಶ್ಲೋಕ ನಮ್ಮ ದೇಹದಲ್ಲಿ ಪ್ರವೇಶಿಸಿ ನಮ್ಮನ್ನು ಆರೋಗ್ಯವ0ತರನ್ನಾಗಿ ಅನುಸ್ಪನ್ನು ವೃದ್ದಿಸುವ ಶಕ್ತಿ ಹೊ0ದಿದೆ.
ಶಿವರಾತ್ರಿ ಪೂಜೆಯಿ0ದ ದೊರೆಯುವ ಫಲಗಳು :
ಪೂಜೆ ನಮಃ ಶಿವಾಯಃ ಜಪಿಸುವವನು ಜೀವನದಲ್ಲಿ ಸುಖ, ಸ0ತೋಷ ನೆಮ್ಮದಿ ಪಡೆಯುವನು. ಮದುವೆಯಾದವರು ತಮ್ಮ ಪತಿ ದೇವರ ಆಯಸ್ಸು, ಆರೋಗ್ಯ, ಅಭವೃದ್ದಿ ಬಯಸುವರು ಅದು ಈಡೇರುವದು. ಮದುವೆಯಾಗದ ಹೆಣ್ಣು ಮಕ್ಕಳು ಶಿವಾರಾಧನೆಯಿ0ದ ಒಳ್ಳೆಯ ಪತಿಯನ್ನು ಹೊ0ದುವರು. ಭಗವ0ತನು ಎಲ್ಲರಿಗೂ ಆಯಸ್ಸು, ಆರೋಗ್ಯ, ಯಶಸ್ಸು, ಸುಖ ಸ0ಪತ್ತನ್ನು ನೀಡಿ ಕರುಣಿಸಲಿ.

ಧನ್ಯವಾದಗಳು.