Tuesday 11 April 2017

Aarathiye Dharegilidante Song Lyrics

Aarathiye Dharegilidante Song Lyrics


ಚಿತ್ರ: ದೃವತಾರೆ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ಎಂ.ಎಸ್ ರಾಜಶೇಕರ್

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲಾ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಮಾಮರ ತೂಗುತ,ಚಾಮರ ಹಾಸುತ,ಪರಿಮಳ ಎಲ್ಲೇಡೇ ಚಲ್ಲುತಿರೆ.
ಗಗನದ ಅಂಚಲಿ ರಂಗನು ಚೆಲ್ಲುತಾ,ಸಂದ್ಯೇಯು ನಾಟ್ಯವಾ ಹಾಡುತಿರೆ.
ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ, ಕೋಗಿಲೆಯು ನಲಿಯುತಿರೆ ,
ಲ ಲ ಲ ಲಾ ......ಲ ಲ ಲ ಲ ಲಾ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.

ಪ್ರೇಮದ ಭಾವಕೆ,ಪ್ರೀತಿಯಾ ರಾಗಕೆ,ಮೌನವೇ ಗೀತೆಯಾ ಹಾಡುತಿರೆ,
ಸರಸದ ಸ್ನೇಹಕೆ.ಒಲವಿನ ಕಾಣಿಕೆ,ನೀಡಲು ಅಧರವು ಅರಳುತಿರೆ,
ಎಂದಿಗೂ ಹೀಗೆ ಬಾಳುವಾಸೆ ತುಂಬಿ ಬಂದು
ಪ್ರೇಮಿಗಳು ನಲಿಯುತಿರೆ,ಪ್ರೇಮಿಗಳು ನಲಿಯುತಿರೆ

ಆರತಿಯೇ ಧರೆಗಿಳಿದಂತೆ,ಆ ಮದನಾ ನಗುತಿರುವಂತೆ,
ಕಲ್ಲು ಮುಳ್ಳೆಲ್ಲ,ಬಳ್ಳಿ ಮೊಗ್ಗೆಲ್ಲಾ,ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.ಹೂಬಾಣವಾಯಿತೋ ಎನಿಸುತಿದೆ.
ಹೂಬಾಣವಾಯಿತೋ ಎನಿಸುತಿದೆ.

Ninagaagi Ododi Bande Song Lyrics

Ninagaagi Ododi Bande Song Lyrics


ಚಿತ್ರ: ಸನಾದಿ ಅಪ್ಪಣ್ಣ
ಸಂಗೀತ:G K ವೆಂಕಟೇಶ್
ಸಾಹಿತ್ಯ: ಚಿ .ಉದಯಶಂಕರ್
ನಿರ್ದೇಶನ:ವಿಕ್ರಂ ಶ್ರೀನಿವಾಸ್
ಗಾಯಕರು: ಡಾ.ರಾಜಕುಮಾರ್

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ...

ತಣ್ಣನೇ ಗಾಳಿ ಬೀಸಿದ ಹಾಗೆ ,ಬಾಳಲಿ ಬಂದೆ ಸಂತಸ ತಂದೆ ,
ಕಣ್ಣಿಗೇ ಮಿಂಚು ಕಾಣುವ ಹಾಗೆ ಬಾಳಿನ ಬಾನಲಿ  ಬೆಳಕನು ತಂದೆ,
ಸ್ನೇಹದೀ ಸೇರಿ ....ಮೋಹವ ತೋರಿ .....ಸನಿಹಕೆ ಸಾರಿ ...ಮನವನು ಸೇರಿ .....
ಏಕೇ.......ನೀ ಮರೆಯಾದೆ ......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೆ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ...

ಬಿಸಿಲಿಗೆ ಹೂವು ಬಾಡುವ ಹಾಗೆ,ಕಾಣದಿ ನೊಂದೆ ವಿರಹದಿ ಬೆಂದೆ ,
ಮುಳ್ಳಿನ ಬಲೆಯ ಹಿಡಿಯಂತಾಗಿ,ಅಳುತಿದೆ ಮನವು ನಗುತಿದೆ ತನುವು ,
ತೀರದ ನೋವಾ ....ತಾಳದು ಜೀವಾ.....ಕಾಣದೆ ನೀನು ,ಉಳಿಯೇನು ನಾನು .....'
ಏಕೇ .....ನೀ ದೂರಾದೆ ............ದೂರಾದೆ .......

ನಿನಗಾಗಿ ಓಡೋಡಿ ಬಂದೇ,ನಿನಗಾಗಿ ಓಡೋಡಿ ಬಂದೇ  ,ನಾನು
ಕಾಣದೇ ಹೀಗೇಕೆ ಮರೆಯಾಗಿ ಹೋದೆ,  ಮರೆಯಾಗಿ ಹೋದೆ,  ನೀನು
ನಿನಗಾಗಿ ಓಡೋಡಿ ಬಂದೇ

Beladingalaagi Baa Song Lyrics

Beladingalaagi Baa Song Lyrics


ಚಿತ್ರ: ಹುಲಿ ಹಾಲಿನ ಮೇವು
ಸಂಗೀತ: G K ವೆಂಕಟೇಶ್
ಸಾಹಿತ್ಯ:ಚಿ. ಉದಯಶಂಕರ್
ನಿರ್ದೇಶನ:ವಿಜಯ್
ಗಾಯಕರು:ಡಾ!!ರಾಜಕುಮಾರ್

ಬೆಳದಿಂಗಳಾಗಿ ಬಾ ..........
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ................

ಕಣ್ಣಲ್ಲಿ ತುಂಬಿ ಚೆಲುವಾ,ಎದೆಯಲ್ಲಿ ತುಂಬಿ ಒಲವಾ
ನನ್ನೇದೆಯ ತಾಳ ನೀನು,ನನ್ನುಸಿರ ರಾಗ ನೀನು
ನನ್ನೂಡಲ ಜೀವ ನೀ ಸಂತೋಷವೇ .........
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ,
ನೀನಿಲ್ಲವಾದರೆ  ಈ ಪ್ರಾಣ ನಿಲ್ಲದೆ.......

ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ.......

ಕಾವೇರಿ ತಾಯಿ ನನ್ನಾ,ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ ಬೆಳಕಾಗಲೂ........
ಆ ದೇವಿಯಾಣೇ ನೀನೆ ಸಂಗಾತಿ ಕೇಳೇ ಜಾಣೆ,
ನೀಡುವೇನು ಬಾಷೆಯ,ಬಿಡು ಚಿಂತೆಯಾ .....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....
ಈ ನಮ್ಮ ಪ್ರೇಮಕೆ,ನಾ ಕೊಡಲೇ ಕಾಣಿಕೆ....

ಬೆಳದಿಂಗಳಾಗಿ ಬಾ ,ತಂಗಾಳಿಯಾಗಿ ನಾನು,
ಆನಂದವಾ ನೀಡುವೇ... ಒಂದಾಗುವೇ.....
ಬೆಳದಿಂಗಳಾಗಿ ಬಾ.......