Monday 18 December 2017

Akashadalli Baanadiyagi Kannada Song Lyrics

Akashadalli Baanadiyagi Kannada Song Lyrics


ಚಿತ್ರ: ಕಾವೇರಿ (1975)
ರಚನೆ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವ ನಗು ನಗುವ ಬಾ…
ಆನಂದದಿಂದ ಒಂದಾದ ಬಂಧ
ಸೊಗದ ಶುಭದ ಸಂಗಮ
ಮೃದು ಮಧುರ ಇದು ಅಮರ ಬಾ… ।। ಪಲ್ಲವಿ ।।

ತೇಲಿ ತೇಲಿ ಹೋಗುವ
ದೂರ ದೂರ ಸಾಗುವ
ಮಧುರ ಮಿಲನ ಸುಧೆಯ ಪಾನ
ಇಲ್ಲೆ ಇಂದ್ರ ವೈಭವ
ಹೃದಯ ಮೌನ ಭಾಷೆಯ
ಕಣ್ಣ ಮಿಂಚು ಸನ್ನೆಯ
ಒಲವ ಕರೆಯ ಸರಸ ಸಮಯ
ನೋಡು ಪ್ರೇಮ ಮಾಯೆಯ ।। ೧ ।।

ಜಾತಿ ಮತವ ಮೀರಿದ
ಪ್ರೇಮ ರಾಜ್ಯ ಸಂಪದ
ನಿನಗೆ ನನಗೆ ಅವನ
ಕೊಡುಗೆ ಅದನೆ ಹಂಚಿಕೊಳ್ಳುವ
ಹೊನ್ನ ಮಳೆಯು ಬೀಳಲಿ
ನಮ್ಮ ಒಲವ ಬಾಳಲಿ
ನನಗೆ ನೀನು ನಿನಗೆ ನಾನು
ಒಂದೇ ತಾಣವಾಗುವಾ ।। ೨ ।।

Ondu Malebillu Kannada Song Lyrics

Ondu Malebillu Kannada Song Lyrics


ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಬಾವನೇ ಬಾಕಿ ಇವೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡೂ ಸಹ……
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ.

ಸನ್ನೆಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂತಾ ಆವೇಗ ಈ ತವಕ ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ ಪ್ರೀತಿಗೆ ಒಂದು ಹೆಜ್ಜೆ ಮುಂದಾಗಿವೆ
ಏನೇನೋ ಮಾತಾಡಿವೆ ಯಾತಕೆ ಹೀಗಾಗಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ ಬಳೆ ಮಂಚ ನೋಡುತಿವೆ ಬಿಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ ದೀಪ ಮಲಗುತಿದೆ ಈ ರಗಳೆ
ತುಂಬಾ ಹೊಸದಾದ ಈ ಕಥನ ಒಮ್ಮೆ ನಿಶ್ಯಬ್ದ ಒಮ್ಮೆ ಸಿಹಿ ಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ …. ಮಾತಲಿ ಮುದ್ದಾಡಿವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬಾ ಸೊಗಸಾಗಿ
ಏನನೋ ಮಾತಾಡಿವೆ
ಬಾವನೇ ಬಾಕಿ ಇವೆ

Bhagyada Laxmi Baaramma Song Lyrics

Bhagyada Laxmi Baaramma Song Lyrics


ಭಾಗ್ಯದ ಲಕ್ಷ್ಮೀ ಬಾರಮ್ಮ
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮೀ ಬಾರಮ್ಮ ।। ಪಲ್ಲವಿ ।।

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ।। ೧ ।।

ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ ।। ೨ ।।

ಅತ್ತಿತ್ತಗಲದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ।। ೩ ।।

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ ।। ೪ ।।

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ⁠⁠ ।। ೫ ।।

ಸಾಹಿತ್ಯ: ಪುರಂದರ ದಾಸ